ರೇಖಾಜಗದೀಶ್ ಅರ್ಪಿಸುವ, ಸೌಂದರ್ಯ ಜಗದೀಶ್ ಫ಼ಿಲಂಸ್ ಲಾಂಛನದಲ್ಲಿ ಸೌಂದರ್ಯ ಜಗದೀಶ್ ನಿರ್ಮಿಸುತ್ತಿರುವ ‘ಸ್ನೇಹಿತರು ಚಿತ್ರದ ಕ್ಲೈಮ್ಯಾಕ್ಸ್ ಭಾಗದ ಚಿತ್ರೀಕರಣ, ಸಾಹಸ ನಿರ್ದೇಶಕ ಪಳನಿರಾಜ್ ಅವರ ಸಾರಥ್ಯದಲ್ಲಿ ಒಂದು ಸಾಹಸ ಸನ್ನಿವೇಶ ಹಾಗೂ ಹಲವು ದೃಶ್ಯಗಳ ಚಿತ್ರೀಕರಣ ಚೆನ್ನೈ ಹಾರ್ಬರ್ನಲ್ಲಿ ನಡೆದಿದೆ. ಐದು ದಿನಗಳ ಕಾಲ ನಡೆದ ಚಿತ್ರೀಕರಣದಲ್ಲಿ ವಿಜಯರಾಘವೇಂದ್ರ, ತರುಣ್, ಸೃಜನ್ಲೋಕೇಶ್, ರವಿಶಂಕರ್, ಪ್ರಣಿತಾ, ಬುಲೆಟ್ಪ್ರಕಾಶ್, ರಮೇಶ್ಭಟ್, ಟೆನ್ನಿಸ್ಕೃಷ್ಣ, ಶೋಭರಾಜ್, ಗಿರಿಜಾಲೋಕೇಶ್ ಮುಂತಾದವರು ಭಾಗವಹಿಸಿದ್ದರು. ಮಾತಿನ ಭಾಗದ ಚಿತ್ರೀಕರಣ ಪೂರ್ಣಗೊಂಡಿರುವ ಈ ಚಿತ್ರಕ್ಕೆ ಐದು ಹಾಡುಗಳ ಚಿತ್ರೀಕರಣ ಮಾತ್ರ ಬಾಕಿಯಿದೆ.
ರಾಮ್ನಾರಾಯಣ್ ರಚನೆ ಹಾಗೂ ನಿರ್ದೇಶನದ ಈ ಚಿತ್ರಕ್ಕೆ ವಿ.ಹರಿಕೃಷ್ಣರ ಸಂಗೀತವಿದೆ. ಎಂ.ಆರ್.ಸೀನು ಛಾಯಾಗ್ರಹಣ, ಗಣೇಶ್.ಎಂ ಸಂಕಲನ, ತ್ರಿಭುವನ್, ಹರ್ಷ ನೃತ್ಯ ನಿರ್ದೇಶನ, ಪಳನಿರಾಜ್, ರವಿವರ್ಮ ಸಾಹಸ ನಿರ್ದೇಶನ ಹಾಗೂ ನಂಜುಂಡಸ್ವಾಮಿ ಅವರ ಕಲಾ ನಿರ್ದೇಶನ ‘ಸ್ನೇಹಿತರು ಚಿತ್ರಕ್ಕಿದೆ.
ವಿಜಯರಾಘವೇಂದ್ರ, ತರುಣ್ಚಂದ್ರ, ರವಿಶಂಕರ್, ಸೃಜನ್ಲೋಕೇಶ್, ಪ್ರಣೀತಾ, ಮಾ||ಸ್ನೇಹಿತ್, ಶರಣ್, ರಮೇಶ್ಭಟ್, ಗಿರಿಜಾಲೋಕೇಶ್, ಶೋಭ್ರಾಜ್, ಬುಲೆಟ್ಪ್ರಕಾಶ್, ಸಿಹಿಕಹಿಚಂದ್ರು, ಸಾಧುಕೋಕಿಲಾ, ಟೆನ್ನಿಸ್ಕೃಷ್ಣ, ವಿ.ಮನೋಹರ್, ಮೋಹನ್ಜುನೇಜಾ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.